ಗಗನ್ ಗೀತಾ ಆರ್ಟ್ಸ್ ಲಾಂಛನದಲ್ಲಿ ಮುನಿರತ್ನಂ ಎಂ.ಪಿ. ನಿರ್ಮಾಣದ ‘ತ’ ಚಿತ್ರವು ನಾಳೆಯಿಂದ ಬಿಡುಗಡೆಯಾಗುತ್ತಿದೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಗಿರಿಧರ್ ಪಿ. ಸಂಭಾಷಣೆ ಅಮ್ಮು ಪ್ರಸಾದ್, ಛಾಯಾಗ್ರಹಣ ಎಸ್. ಶ್ರೀನಿವಾಸ್, ಸಂಗೀತ ಮುರಳಿ ಲಿಯೋನ್, ಸಂಕಲನ ಬಸವ ಪೈಡಿರೆಡ್ಡಿ, ನೃತ್ಯ ಪವನ್, ಸಾಹಸ ಗಿರಿಧರ್, ಕಲೆ ನಾಣಿ, ನಿರ್ವಹಣೆ ನಾಗೇಂದ್ರ ಪಿ., ತಾರಾಗಣದಲ್ಲಿ ವಿನೋದ್, ಬಿಂದು ಬಾರ್ಬಿ, ಕೃಷ್ಣ, ರೋಜಾ, ದೀಪೇಶ್, ಬಾನುಪ್ರಸಾದ್, ಅಮ್ಮು ಪ್ರಸಾದ್, ನವೀನ್, ರಾಜೇಶ್, ನಭಿ, ಚಿಟ್ಟಿ, ಶ್ರೀನಿವಾಸ್, ದಿನೇಶ್, ಬಾಲಾಜಿ ಮುಂತಾದವರಿದ್ದಾರೆ.